ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಲ್ಪೆ ಸೋಮಶೇಖರ ಭಟ್ ನಿಧನ,

Udupi,BJP Old Member Malpe Somashekar Bhat Death,

ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಲ್ಪೆ ಸೋಮಶೇಖರ ಭಟ್ ನಿಧನ,
1 / 1

1. ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಲ್ಪೆ ಸೋಮಶೇಖರ ಭಟ್ ನಿಧನ,

ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಮಲ್ಪೆ ಸೋಮಶೇಖರ ಭಟ್ ನಿಧನರಾಗಿದ್ದಾರೆ. ಉಡುಪಿ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಅವರು ಜನ ಸಂಘದ ಹಿರಿಯ ನಾಯಕರಾಗಿ ಉಡುಪಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ್ದರು. ಅವರನ್ನು ಭೀಷ್ಮ ಪಿತಾಮಹ ಎಂದು ಕರೆಯಲಾಗುತ್ತಿತ್ತು. ವರುಣ್ ಪೈಪಿಂಗ್ ಸಿಸ್ಟಮ್ ನ ಸ್ಥಾಪಕರಾಗಿರುವ ಇವರು ಜನಮಾನಸದಲ್ಲಿ ಸೋಮಣ್ಣ ಎಂದೇ ಪ್ರಸಿದ್ಧರಾಗಿದ್ದರು. ಡಾ| ವಿ.ಎಸ್ ಆಚಾರ್ಯರ ರಾಜಕೀಯ ಗುರುಗಳಾಗಿದ್ದರು. ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇ ಶ ಸಹಕಾರಿ ಸಂಘ(ರಿ)ದ ನಿರ್ದೇಶಕರಾಗಿ ಮಲ್ಪೆ ಸೋಮಶೇಖರ ಭಟ್ ಸೇವೆ ಸಲ್ಲಿಸುತ್ತಿದ್ದರು. ಉಡುಪಿ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿಯಾಗಿದ್ದ ಇವರ ನಿಧನಕ್ಕೆ ಅನೇಕ ರಾಜಕೀಯ ನಾಯಕರು, ಅಭಿಮಾನಿಗಳು, ಶಿಷ್ಯಂದರು ಸಂತಾಪ ಸೂಚಿಸಿದ್ದಾರೆ.