ಏ. 17 ರಂದು ಸಪ್ತಭಾಷಾ ಸಂಗಮ ಭೂಮಿಯಲ್ಲಿ ರಕ್ಷಣಾ ಸಚಿವರ ಭರ್ಜರಿ ಪ್ರಚಾರ,

Kasaragod,Saptha Bhasha Sangama,

ಏ. 17 ರಂದು ಸಪ್ತಭಾಷಾ ಸಂಗಮ ಭೂಮಿಯಲ್ಲಿ ರಕ್ಷಣಾ ಸಚಿವರ ಭರ್ಜರಿ ಪ್ರಚಾರ,
1 / 1

1. ಏ. 17 ರಂದು ಸಪ್ತಭಾಷಾ ಸಂಗಮ ಭೂಮಿಯಲ್ಲಿ ರಕ್ಷಣಾ ಸಚಿವರ ಭರ್ಜರಿ ಪ್ರಚಾರ,

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಂ.ಎಲ್. ಅಶ್ವಿನಿಯವರ ಪ್ರಚಾರಕ್ಕಾಗಿ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಇಂದು (ಏ.17ರಂದು) ಕಾಸರಗೋಡಿಗೆ ಆಗಮಿಸಲಿದ್ದಾರೆ. ಆ ಮೂಲಕ ಸಪ್ತ ಭಾಷಾ ಸಂಗಮದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಅವರಿಗೆ  ಸೇನಾ ನಾಯಕನ ಬಲ ಸಿಗಲಿದೆ. ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ತಾಳಿಪಡ್ಡು ಮೈದಾನದಲ್ಲಿ ನಡೆಯುವ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್‌ನಾಥ್ ಸಿಂಗ್ ಭಾಗವಹಿಸಿ ಮಾತನಾಡಲಿದ್ದಾರೆ. ಕೇಂದ್ರ ಸಚಿವರು ಭಾಗವಹಿಸುವ ಚುನಾವಣಾ ಪ್ರಚಾರ ವೇದಿಕೆ ನಿರ್ಮಾಣ ಅಂತಿಮ ಹಂತ ತಲುಪಿದೆ. ರಕ್ಷಣಾ ಸಚಿವರು ಆಗಮಿಸುತ್ತಿರುವ ಹಿನ್ನಲೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಚಿವರಿಗೆ ಬಿಗಿ ಭದ್ರತೆ ಒದಗಿಸಲು ಎನ್‌ಎಸ್‌ಜಿ ಪಡೆ ಈಗಾಗಲೇ ಕಾಸರಗೋಡಿಗೆ ಆಗಮಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.