ಕಾಸರಗೋಡು: ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿಅಗ್ನಿ ಅನಾಹುತ,
Kasaragod,Kubanoor Weast Godum Fire Acciedent,
1. ಕಾಸರಗೋಡು: ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿಅಗ್ನಿ ಅನಾಹುತ,
ಉಪ್ಪಳ ಸಮೀಪದ ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕ ದಲ್ಲಿ ಬುಧವಾರ ಸಂಜೆ ಮತ್ತೆ ಅಗ್ನಿ ಅನಾಹುತ ಉಂಟಾಗಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಉಪ್ಪಳ ಪೇಟೆಯನ್ನು ಒಳಗೊಂಡ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ತ್ಯಾಜ್ಯವನ್ನು ಕಳೆದ ಹಲವು ವರ್ಷಗಳಿಂದ ಕುಬಣೂ ರುನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕ ಕ್ಕೆ ತಂದು ಹಾಕಲಾಗುತ್ತಿದೆ. ಈ ಘಟಕದ ಸುತ್ತಮುತ್ತ ಹಾಕಲಾಗಿರುವ ತ್ಯಾಜ್ಯ ಅಗ್ನಿಅನುಹುತಕ್ಕೆ ಒಳಗಾಗುತ್ತಿದ್ದು ಪರಿಸರ ವಾಸಿಗಳು ದುರ್ನಾತ ಹಾಗೂ ಹೊಗೆಯ ಸಮಸ್ಯೆ ಗೆ ಒಳಗಾಗುತ್ತಿದ್ದಾರೆ. ವಾರದಲ್ಲಿ ಎರಡನೇ ಭಾರೀ ಅಗ್ನಿ ಅನಾಹುತ ಉಂಟಾಗಿದೆ. ಉಪ್ಪಳ ಹಾಗೂ ಕಾಸರಗೋಡಿನಿಂದ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಗಂಟೆಗಳ ಕಾಲ ಹರಸಾಹಸ ದಿಂದ ಬೆಂಕಿಯನ್ನು ನಂದಿಸಿದರು.