ಇಬ್ಬರು ಯುವಕರ ಮೃತದೇಹ ರೈಲು ಬಡಿದ ಸ್ಥಿತಿಯಲ್ಲಿ ಪತ್ತೆ,

Kasaragod Train Acciedent,

ಇಬ್ಬರು ಯುವಕರ ಮೃತದೇಹ ರೈಲು ಬಡಿದ ಸ್ಥಿತಿಯಲ್ಲಿ ಪತ್ತೆ,
1 / 1

1. ಇಬ್ಬರು ಯುವಕರ ಮೃತದೇಹ ರೈಲು ಬಡಿದ ಸ್ಥಿತಿಯಲ್ಲಿ ಪತ್ತೆ,

ಕಾಸರಗೋಡು ಪಳ್ಳಂ ರೈಲ್ವೆ ಹಳಿ ಸಮೀಪ ಮಂಗಳವಾರ ಬೆಳಿಗ್ಗೆ ಇಬ್ಬರು ಯುವಕರ ಮೃತದೇಹ ರೈಲು ಬಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪೈಕಿ ಓರ್ವ ನೆಕ್ರಾಜೆ ಪೂಕೈಮೂಲೆಯ ಮುಹಮ್ಮದ್ ಸಹೀರ್(19) ಎಂದು  ಗುರುತು ಪತ್ತೆ ಹಚ್ಚಲಾಗಿದೆ. ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಮೃತದೇಹಗಳನ್ನು ಗಮನಿಸಿದ ಪರಿಸರ ವಾಸಿಗಳು ರೈಲ್ವೆ ಹಾಗೂ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಲಪಿದ ಪೊಲೀಸರು ಮಹಜರು ನಡೆಸಿದರು. ಇಬ್ಬರ ಗುರುತು ಪತ್ತೆ ಯಾಗಲಿಲ್ಲ. ಮಧ್ಯಾಹ್ನ ಸಹೀರ್ ನ ತಾಯಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹದ ಗುರುತು ಪತ್ತೆ ಹಚ್ಚಿದರು. ಮೃತದೇಹದ ಸಮೀಪ ನಾಲ್ಕು ಮೊಬೈಲ್ ಫೋನ್ ಗಳು ಪತ್ತೆಯಾಗಿವೆ. ಈ ಪೈಕಿ ಎರಡು ಮೊಬೈಲ್ ಗಳನ್ನು ಇವರು ಕಳವು ಮಾಡಿರುವುದಾಗಿ ಶಂಕಿಸಲಾಗಿದೆ.ಪೊಲೀಸರು ನಡೆಸಿದ ತನಿಖೆಯಿಂದ ಇವರ ಮೃತ ದೇಹದ ಸಮೀಪ ಪತ್ತೆಯಾದ ಎರಡು ಮೊಬೈಲ್ ಗಳು ಕಾಸರಗೋಡಿನ ಕ್ವಾಟರ್ಸ್ ವೊಂದರಿಂದ ಕಳವು ಮಾಡಿದ್ದಾಗಿ ಮಾಹಿತಿ ಲಭಿಸಿದೆ.ಸೋಮವಾರ ರಾತ್ರಿ ಈ ಮೊಬೈಲ್ ಗಳನ್ನು ಕಳವು ಮಾಡಲಾಗಿತ್ತು. ಮೊಬೈಲ್ ಕಳವು ಬಗ್ಗೆ ತಮಿಳುನಾಡು ನಿವಾಸಿಗಳು ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರ ಬಳಿಕ ರೈಲು ಬಡಿದು ಯುವಕರಿಬ್ಬರು ಮೃತ ಪಟ್ಟ ಘಟನೆ ನಡೆದಿದೆ. ಆದರೆ ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.