ಉಡುಪಿ:ವಿದ್ಯಾರ್ಥಿಗೆ ಚೂರಿಯಿಂದ ಇರಿದು ಹಲ್ಲೆ,

Udupi College Students Fighting Case,

ಉಡುಪಿ:ವಿದ್ಯಾರ್ಥಿಗೆ ಚೂರಿಯಿಂದ ಇರಿದು ಹಲ್ಲೆ,
1 / 1

1. ಉಡುಪಿ:ವಿದ್ಯಾರ್ಥಿಗೆ ಚೂರಿಯಿಂದ ಇರಿದು ಹಲ್ಲೆ,

ಬ್ರಹ್ಮಾವರದ ಹೇರೂರಿನ ನಿವಾಸಿಯಾಗಿರುವ ಪ್ರತೀಕ್ (17)ನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಉಡುಪಿಯ ಎಂಜಿಎಂನ ಮೈದಾನದಲ್ಲಿ ನಡೆದಿದ್ದು ಒಟ್ಟು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಹಾಸ್, ಮೋನೀಶ್, ತರುಣ್ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.ಉಡುಪಿಯ ಕೋಚಿಂಗ್ ಸೆಂಟರ್ವೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರತೀಕ್ ಎರಡು ತಿಂಗಳ ಹಿಂದೆ ಬೈಕ್ ವೊಂದನ್ನು ಖರೀದಿ ಮಾಡಿದ್ದ.ಆಗ ಅದೇ ಕೋಚಿಂಗ್ ಸೆಂಟರ್‍ ನ ಪರಿಚಯದ ವಿದ್ಯಾರ್ಥಿ ಸುಹಾಸ್ ಎಂಬಾತ ಕದ್ದಿರುವ ಬೈಕ್ ಎಂದು ನಿಂದಿಸಿದ್ದ ಎನ್ನಲಾಗಿದೆ.ಅಲ್ಲದೆ ಪ್ರತೀಕ್ ಅವರು ಸೋಮವಾರ ಮಧ್ಯಾಹ್ನದ ವೇಳೆ ಎಂಜಿಎಂ ಮೈದಾನಕ್ಕೆ ಹೋದಾಗ ಸ್ಥಳದಲ್ಲಿ ಇದ್ದ ಆರೋಪಿಗಳಾದ ಸುಹಾಸ್, ಮೋನೀಶ್, ತರುಣ್ ಹಾಗೂ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿದ್ದಾರೆ ಹಾಗೂ ಆರೋಪಿತರಲ್ಲಿ ಒಬ್ಬನಾಗಿರುವ ತರುಣ್ ಎಂಬಾತ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಪ್ರತೀಕ್ ಅವರ ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ಇರಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೆ ಒಳಾಗಿರುವ ಪ್ರತೀಕ್ ಅವರು ದೂರು ದಾಖಲಿಸಿದ್ದಾರೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.