ಕಾಸರಗೋಡು: ಬೆಲೆ ಬಾಳುವ ಶ್ರೀಗಂಧದ ಮರ ಕಳವು ಪ್ರಕರಣ- ನಾಲ್ವರ ಬಂಧನ,

Kasaragod, Sandalwood Cases,

ಕಾಸರಗೋಡು: ಬೆಲೆ ಬಾಳುವ ಶ್ರೀಗಂಧದ ಮರ ಕಳವು ಪ್ರಕರಣ- ನಾಲ್ವರ ಬಂಧನ,
1 / 1

1. ಕಾಸರಗೋಡು: ಬೆಲೆ ಬಾಳುವ ಶ್ರೀಗಂಧದ ಮರ ಕಳವು ಪ್ರಕರಣ- ನಾಲ್ವರ ಬಂಧನ,

ಕಾಸರಗೋಡು; ಮನೆ ಹಿತ್ತಿಲಿನಿಂದ ಬೆಲೆ ಬಾಳುವ ಶ್ರೀಗಂಧದ ಮರವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಬೇಡಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕುಂಡಂಗುಳಿ ಪರಿಸರದ ರಾಜೇಶ್ ( 32) , ಮಧುಸೂದನ್ ( 43) , ಶಬೀರ್ ( 43) ಮಟಿಯಿ ಇಬ್ರಾಹಿಂ ಬಾದುಷಾ ( 43) ಬಂಧಿತ ಆರೋಪಿಗಳು. ಎರಿಂಞಪ್ಪುಯ ದ ಬಾಲಕೃಷ್ಣನ್ ಎಂಬವರ ಹಿತ್ತಿಲಿನಲ್ಲಿದ್ದ ಸುಮಾರು 30 ವರ್ಷ ಹಳೆಯ ಶ್ರೀಗಂಧದ ಮರವನ್ನು ಇವರು ಕಡಿದು ಸಾಗಿಸಿದ್ದರು . ಗುರುವಾರ ಮಧ್ಯಾಹ್ನ ಮರವನ್ನು ಸಾಗಾಟ ಮಾಡಿದ್ದು , ಇದನ್ನು ಗಮನಿಸಿದ ಪರಿಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳಕ್ಕಾಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದು , ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು , ಬೈಕ್ , ಶ್ರೀಗಂಧ ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ . ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.