ಕೆಎಸ್ಆ‌ರ್‌‌ಟಿಸಿ ಬಸ್‌ ಹಾಗೂ ಸ್ಕೂಟಿ ನಡುವೆ ಅಪಘಾತ - ಸವಾರ ಮೃತ್ಯು,

Sulya Bus And Scooty Acciedent,

ಕೆಎಸ್ಆ‌ರ್‌‌ಟಿಸಿ ಬಸ್‌ ಹಾಗೂ ಸ್ಕೂಟಿ ನಡುವೆ ಅಪಘಾತ - ಸವಾರ ಮೃತ್ಯು,
1 / 1

1. ಕೆಎಸ್ಆ‌ರ್‌‌ಟಿಸಿ ಬಸ್‌ ಹಾಗೂ ಸ್ಕೂಟಿ ನಡುವೆ ಅಪಘಾತ - ಸವಾರ ಮೃತ್ಯು,

ಗುತ್ತಿಗಾರು ಬಾಕಿಲ ಎಂಬಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತ್ತಿದ್ದ ಸ್ಕೂಟಿಗೆ ಎದುರಿನಿಂದ ಬಂದ ಕೆ.ಎಸ್.ಆ‌ರ್.ಟಿ.ಸಿ ಬಸ್‌ ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ. ಪೆರಾಜೆ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನಡುಗಲ್ಲು ನಿವಾಸಿ ಶಿವರಾಮ ಗೌಡ (70) ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಮಗಳು ನವ್ಯಶ್ರೀ ಯ ಕಾಲಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ದೇವಕಿ, ಪುತ್ರರಾದ ಉಲ್ಲಾಸ್, ಹಿತೇಶ್, ಪುತ್ರಿಯರಾದ ಕಾವ್ಯಶ್ರೀ, ಮಧುಶ್ರೀ, ಧನುಶ್ರೀ, ಸ್ವಾತಿ ಹಾಗೂ ನವ್ಯಶ್ರೀ ಯನ್ನು ಅಗಲಿದ್ದಾರೆ.