ಮನೆಯಿಂದ ಆಸ್ಪತ್ರೆಗೆಂದು ಹೊರಟ ಯುವಕ ನಿರ್ಜನ ಹಿತ್ತಿಲಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ,

Uppala,Bayar,Death Case,

1. ಮನೆಯಿಂದ ಆಸ್ಪತ್ರೆಗೆಂದು ಹೊರಟ ಯುವಕ ನಿರ್ಜನ ಹಿತ್ತಿಲಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ,

ಉಪ್ಪಳ : ಬಾಯಾರು ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿಯ ಮತ್ತಾಡಿ ಎಂಬವರ ಪುತ್ರ ಗೋಪಾಲ (28) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಮನೆಯಿಂದ ಆಸ್ಪತ್ರೆಗೆಂದು ಹೊರಟು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಕಾಡುಪೋದೆ ತುಂಬಿರುವ ನಿರ್ಜನ ಹಿತ್ತಿಲಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೇಯಾಗಿದ್ದಾನೆ.ಇವರ ಮೃತದೇಹ ನಿನ್ನೆ ರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ಕಾಡು ಪೊದೆಗಲಿರುವ ಹಿತ್ತಿಲಲ್ಲಿ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಇಂದು ಬೆಳಿಗ್ಗೆ ಮಂಜೇಶ್ವರ ಸಿ. ಐ. ರಜೀಶ್, ಎಸ್. ಐ. ಪ್ರಶಾಂತ್ ಮೊದಲಾದವರು ತಲುಪಿದ್ದು, ಮೃತಾದೇಹವನ್ನು ಮಹಜರು ನಡೆಸಿದ ಬಳಿಕ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಯಿತು.