ಆಕ್ರೋಶದಲ್ಲಿ ಉದ್ಯಾವರ ಮಾಡ ಜನರು. ಬೇಡಿಕೆ ಈಡೇರಿಸುವವರೆಗೆ ಪ್ರತಿಭಾತಿಸುವ ನಿರ್ಧಾರ

Sumanth alva, maada, accident

1 / 1

1.

ಉದ್ಯಾವರ ಮಾಡ ಜನ ಶೋಕ ಸಾಗರದಲ್ಲಿ . ಸರಿಯಾದ ಸರ್ವೇ ಸಮಾಲೋಚನೆ,ಇಲ್ಲದೆ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಕೆಗೆ ಬಲಿಯಾದದ್ದು ಅಮಾಯಕ ಯುವಕ, ತಮ್ಮ ಕರುಳ ಕುಡಿ ಇನ್ನು ಈ ಭೂಮಿ ಮೇಲೆ ಇಲ್ಲ ಎನ್ನುವ ಸುದ್ದಿ ತಿಳಿದಾಗ ಪ್ರಜ್ಞೆ ಕಳಕೊಂಡ ತಾಯಿ ಇನ್ನೂ ಎಚ್ಚರ ಗೊಂಡಿಲ್ಲ. ಹೌದು ಮೊನ್ನೆ ಉದ್ಯಾವರ ಮಾಡದ ಬಳಿ ರಸ್ತೆ ದಾಟುವಾಗ ಉಂಟಾದ ಅಪಘಾತದಲ್ಲಿ ಮಾಡ ನಿವಾಸಿ ರಘು ನಾಥ ಆಳ್ವ ಲಕ್ಷ್ಮಿ ದಂಪತಿಯ ಪುತ್ರ ಸುಮಂತ್ ಆಳ್ವ 17 ಹರೆಯ ಬಾಲಕ ಪ್ರಾಣ ಕಳೆದು ಕೊಂಡಿದ್ದಾನೆ ಘಟನೆ ನಡೆದ ಕೂಡಲೇ ಊರವರು ಯುವಕನನ್ನ ಮಂಗಳೂರು ಆಸ್ಪತ್ರೆ ಸಾಗಿಸಿದ್ದಾದರೂ ಪ್ರಾಣ ಉಳಿಸಲಾಗಲ್ಲಿಲ್ಲ. ಇಷ್ಟಕೆಲ್ಲ ಕಾರಣ ರಾಷ್ಟ್ರೀಯ ಹೆದ್ದಾರಿ ಆಶಾಸ್ತ್ರೀಯ ಕಾಮಗಾರಿಕೆ ಎಂದು ಊರವರು ಕುಪಿತ ಗೊಂಡು ಇಂದು ಬಹಳಷ್ಟು ಜನ ಸೇರಿ ಬ್ರತಿಭಟನೆ ನಡೆಸಿದರು. ಇಂತ ದುರ್ಗಟನೆ ಮತ್ತೆ ಮಾರುಕಲಿಸದಿರಲು ನಿವಾಸಿಗಳು ಸರಕಾರದ ಮುಂದೆ ಕೆಲವೊಂದು ಬೇಡಿಕೆ ಇಟ್ಟಿದ್ದಾರೆ ಇದು ಈಡೇರಿಸುವ ವರೆಗೆ ಕಾಮಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಇಡಿದ್ದಿದ್ದಾರೆ. ಬೇಡಿಕೆ ಕೇವಲ ಇಷ್ಟೇ ಒಂದು ಅಂಡರ್ ಪಾಸ್ ಮತ್ತು ಪದಾಚಾರಿಗಳಿಗೆ ಮೇಲಸೇತುವೆ ಅಷ್ಟೇ ಇನ್ನಾದರೂ ಇಂತ ಘಟನೆ ಮಾರುಕಳಿಸುವ ಮೊದಲು ರಸ್ತೆ ನಿರ್ಮಾಣ ಕಂಪೆನಿಗಳ ಇಂಜಿನಿಯರುಗಳು ಸರಕಾರ ಕಣ್ಣು ತೆರೆಯಲಿ ಸುಮಂತನ ಆತ್ಮಕ್ಕೆ ಆಗಲಾದರೂ ಶಾಂತಿ ದೊರೆತೀತು