ಮಂಗಳೂರು: ಹುಲಿವೇಷಧಾರಿಗಳ ಎನರ್ಜಿಗೆ ಸಲಾಂ ಎಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ,

Manglore, Dasara,Hulivesha,

ಮಂಗಳೂರು: ಹುಲಿವೇಷಧಾರಿಗಳ ಎನರ್ಜಿಗೆ  ಸಲಾಂ ಎಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ,
1 / 1

1. ಮಂಗಳೂರು: ಹುಲಿವೇಷಧಾರಿಗಳ ಎನರ್ಜಿಗೆ ಸಲಾಂ ಎಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ,

ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ‌ ಪಿಲಿನಲಿಕೆ ಕಾರ್ಯಕ್ರಮ ಮಂಗಳೂರು ನಗರದ ಉರ್ವ ಮೈದಾನದಲ್ಲಿ ನಡೆಯಿತು.

ಮಂಗಳೂರಿನ ಕಾರ್ಯಕ್ರಮಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಹಾಗೂ ನಟ ಸುನೀಲ್‌ ಶೆಟ್ಟಿ ಆಗಮಿಸಿ ಹುಲಿವೇಷ ವೀಕ್ಷಣೆ ಮಾಡಿ ಸಾಕಷ್ಟು ಖುಚಿಪಟ್ಟಿದ್ದಾರೆ.

  • ಹುಲಿವೇಷ ಕಂಡು ದಂಗಾದ‌ ಕ್ರಿಕೆಟಿಗ ಇಲ್ಲಿನ ಸಂಸ್ಕೃತಿ ನೋಡಿ ಖುಷಿಯಾಯ್ತು ನಿಮ್ಮ ಎನರ್ಜಿಗೆ ಸಲಾಂ ಎಂದಿದ್ದಾರೆ. ಈ ವೇಳೆ ಹುಲಿಕುಣಿತದ ಬಗ್ಗೆ ಅವರಿಗೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದರು.
  • ಹರ್ಭಜನ್ ಸಿಂಗ್ ಅವರು ಬರುತ್ತಿದ್ದಂತೆ ಪ್ರೇಕ್ಷಕರು ಮೊಬೈಲ್ ಲೈಟ್ ಆನ್ ಮಾಡಿ ಸಂಭ್ರಮ ವ್ಯಕ್ತಪಡಿಸಿದರು. ಒಟ್ಟು ಹತ್ತು ತಂಡಗಳ ಹುಲಿಕುಣಿತ ಸ್ಪರ್ಧೆ ನಡೆಯುತ್ತಿದ್ದು, ಎರಡು ತಂಡಗಳ ಹುಲಿಕುಣಿತ ವೀಕ್ಷಿಸಿದರು.ಹರ್ಭಜನ್ ಸಿಂಗ್ ಮಾತನಾಡಿ, ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಗೆ ನಾನೇನು ಹೇಳಬೇಕೆಂದು ಗೊತ್ತಿಲ್ಲ ಎಂದು ನೆರೆದಿರುವ ಪ್ರೇಕ್ಷಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ವಿಭಿನ್ನ ಸಂಸ್ಕೃತಿಯನ್ನು ನೋಡಿ ಖುಷಿಯಾಗಿದೆ. ಹುಲಿವೇಷಧಾರಿಗಳ ಎನೆರ್ಜಿ ನೋಡಿ ಒಂದು ಸಲ ನಾನೇ ದಂಗಾದೆ. ಇಷ್ಟೊಂದು ಎನೆರ್ಜಿ ಇದ್ದಲ್ಲಿ ಭಾರತ ಇಪ್ಪತ್ತು ವರ್ಷಗಳ ಕಾಲ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಖಂಡಿತಾ. ವರ್ಲ್ಡ್ ಕಪ್ ಕ್ರಿಕೆಟ್ ನಲ್ಲಿ ಈ ಬಾರಿ ಭಾರತಕ್ಕೆ ಗೆಲುವು ಸಿಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿ ಎಂದು ಹೇಳಿದರು.ಪಿಲಿನಲಿಕೆಯಲ್ಲಿ ಕುಣಿದ ಹುಲಿವೇಷಧಾರಿಗಳ ಆ್ಯಕ್ಷನ್ ನೋಡಿ ನನ್ನ ಮೂವತ್ತು ವರ್ಷದ ಆ್ಯಕ್ಷನ್ ಕೊಚ್ಕೊಂಡು ಹೋಗಿದೆ ಎಂದು ನಟ ಸುನಿಲ್ ಶೆಟ್ಟಿ ಹೇಳಿದರು.