ಮುಸ್ಲಿಂ ಬಾಂಧವನಿಗೆ ಸನ್ಮಾನಿಸಿ ಸೌಹರ್ದತೆ ಸಾರಿದ ಬಲ್ಲಂಗುಡೇಲು ಬ್ರಹ್ಮಕಲಶೋತ್ಸವ,

Kasaragod, Uppala Ballangudel Brahmmakalasha,

ಮುಸ್ಲಿಂ ಬಾಂಧವನಿಗೆ ಸನ್ಮಾನಿಸಿ ಸೌಹರ್ದತೆ ಸಾರಿದ ಬಲ್ಲಂಗುಡೇಲು ಬ್ರಹ್ಮಕಲಶೋತ್ಸವ,
1 / 1

1. ಮುಸ್ಲಿಂ ಬಾಂಧವನಿಗೆ ಸನ್ಮಾನಿಸಿ ಸೌಹರ್ದತೆ ಸಾರಿದ ಬಲ್ಲಂಗುಡೇಲು ಬ್ರಹ್ಮಕಲಶೋತ್ಸವ,

ಮಂಜೇಶ್ವರ : ಇಲ್ಲಿನ ಕಳಿಯಾಟ ಮಹೋತ್ಸವ ಹಾಗೂ ಇನ್ನಿತರ ಉತ್ಸವ ಕಾರ್ಯಕ್ರಮಗಳಿಗೆ ಚಿಕ್ಕ ಮೊತ್ತದಲ್ಲಿ ಲೈಟಿಂಗ್ಸ್ ಸೌಂಡ್ಸ್ ನ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ‌ಮಾಡುತ್ತಿದ್ದ ಝಮ್ ಝಮ್ ಸೌಂಡ್ಸ್ ನ ಮಾಲಕರಾದ ಬಶೀರ್ ಮೂಡಂಬೈಲ್ ರವರನ್ನು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ವೇದಿಕೆ,  ಕ್ಷೇತ್ರದ ಪುನ ಪ್ರತಿಷ್ಠ ಬ್ರಹ್ಮಕಲಶೋತ್ಸವ ಎರಡನೇಯ ದಿನವಾದ (ಫೆ.25) ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನ ಮಾಡಲು ಬಂದಂತ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯ ಹಸ್ತದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ತೊಟ್ಟೆತೋಡಿ,ಪ್ರಭಾಕರ ಚೌಟ ದರ್ಬೆ,ಕಿರಣ್ ಕುಮಾರ್ ಸುಲಾಯ,ಸದಾಶಿವ ಉಳ್ಳಾಲ,ರಾಘವೇಂದ್ರ ರಾವ್ ಮೂಡಂಬೈಲ್, ಕಾಸರಗೋಡು ಜಿಲ್ಲಾ ಪಂ. ಸದಸ್ಯೆ ಕಮಲಾಕ್ಷಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ರವೀಂದ್ರ ಶೆಟ್ಟಿ ಕರಿಬೈಲ್, ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಜಗದೀಶ್ ಮೂಡಂಬೈಲ್,ಕ್ಷೇತ್ರದ ಪೂಜಾರಿಗಳಾದ ನಾರಾಯಣ ಭಗವತೀ ಪೂಜಾರಿ ಉಪಸ್ಥಿತರಿದ್ದರು. ಶೇಖರ ಎಂ.ಸೊಯಿಪಕಲ್ಲ್ ಸ್ವಾಗತಿಸಿ ರಾಮಚಂದ್ರ ಕೋರಿಕ್ಕಾರ್ ವಂದಿಸಿದರು.