ಕಾಸರಗೋಡು : ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮ ಹೆಣ್ಣು ಮಗುವೊಂದು ಮೃತ ಪಟ್ಟಿದೆ,
Kasaragod,Baby Death,
1. ಕಾಸರಗೋಡು : ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮ ಹೆಣ್ಣು ಮಗುವೊಂದು ಮೃತ ಪಟ್ಟಿದೆ.
ಕಾಂಜಂಗಡ್ ಕಲ್ಲೂರಾವಿ ನಿವಾಸಿ ರಂಶಿದ್-ಅನಿಫಾ ದಂಪತಿಗಳ ಪುತ್ರಿ ಜೆಸಾ (1.5) ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಮೃತ ಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತಿದ್ದಾಗ ಸೊಳ್ಳೆ ನಿವಾರಕ ದ್ರಾವಣದ ಬಾಟಲಿ ಆಕಸ್ಮಿಕವಾಗಿ ಬಾಯಲ್ಲಿ ಇಟ್ಟುಕೊಂಡಿದ್ದು, ಅದರಲ್ಲಿದ್ದ ರಾಸಾಯನಿಕ ದ್ರಾವಣ ದೇಹ ಸೇರಿದ ಪರಿಣಾಮವಾಗಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಳಿಸಿದಾದರೂ ಮಗು ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ.