ಬೆಳ್ತಂಗಡಿ ; ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ,
Belthangadi,Ujire,
1. ಬೆಳ್ತಂಗಡಿ ; ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ,
ಶಿಶಿರ ಗ್ರಾಮ ಕೋಟೆ ಬಾಗಿಲು ನಿವಾಸಿ ಸುರೇಶ್ ಗೌಡ(55) ತನ್ನ ಪತ್ನಿ ಮಗಳಿಗೆ ಮಾರಣಾಂತಿಕ ಹಲ್ಲೆ ಮಾಡಿ, ತೀವ್ರ ಗಾಯಗೊಳಿಸಿದ್ದಾನೆ. ಗಾಯಗೊಂಡ ಇಬ್ಬರನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಪತಿ ಕುಡಿದ ಅಮಲಿನಲ್ಲಿ ಪತ್ನಿಯ ಜೊತೆ ಮಾತಿನ ಚಕಮಕಿ ನಡೆದು ಪತ್ನಿಯ ಮುಖಕ್ಕೆ ಹಾಗೂ ಕಣ್ಣಿಗೆ ಕಚ್ಚಿ ಗಾಯಗೊಳಿಸಿದ್ದು ಅಲ್ಲದೇ ಕೋಲಿನಲ್ಲಿ ಹೊಡೆದು ಎಡ ಭಾಗದ ಕಣ್ಣನ್ನು ಹಾನಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಮಗಳು ಪೂಜಾಗೆ ತಲೆಗೆ ಹಾಗೂ ಕಣ್ಣಿಗೆ ಹೊಡೆದು ಪ್ರಾಣಭಯದಿಂದ ಪಾರಾಗಿದ್ದಾರೆ.ಹಲ್ಲೆ ನಡೆಸಿದ ನಂತರ ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದು, ಧರ್ಮಸ್ಥಳ ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದಾರೆ. ಘಟನೆ ಬಗ್ಗೆ ತಾಯಿ ಹಾಗೂ ಮಗಳಿಂದ ಹೇಳಿಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.