ಕೊಂಡೆವೂರ್ ನಲ್ಲಿ ಡಿಸೆಂಬರ್ 10 ಕ್ಕೆ ಹೊಮಿಯೋಪತಿ ಗೋ ಚಿಕಿತ್ಸೆ, ಮಾಹಿತಿ ಶಿಬಿರ,

Uppala,Kondevoor Ashram,

ಕೊಂಡೆವೂರ್ ನಲ್ಲಿ ಡಿಸೆಂಬರ್ 10 ಕ್ಕೆ ಹೊಮಿಯೋಪತಿ ಗೋ ಚಿಕಿತ್ಸೆ, ಮಾಹಿತಿ ಶಿಬಿರ,
1 / 1

1. ಕೊಂಡೆವೂರ್ ನಲ್ಲಿ ಡಿಸೆಂಬರ್ 10 ಕ್ಕೆ ಹೊಮಿಯೋಪತಿ ಗೋ ಚಿಕಿತ್ಸೆ, ಮಾಹಿತಿ ಶಿಬಿರ,

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಕಾಮಧೇನು ಗೋಶಾಲೆಯಲ್ಲಿ ದಿ.10.12.2023 ಭಾನುವಾರ ಅಪರಾಹ್ನ 3.00 ರಿಂದ 5.00 ರ ವರೆಗೆ ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್, ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬೈಯ ದಿನೇಶ್ ಬಾಹ್ರ ಫೌಂಡೇಶನ್ ಸಹಯೋಗದಲ್ಲಿ ಗೋಸಾಕುವವರಿಗೆ, ಹೊಮಿಯೋಪತಿ ಗೋಚಿಕಿತ್ಸೆ ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ.

ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಂಗಳೂರಿನ ಡಾ! ಮನೋಹರ್ ಉಪಾಧ್ಯಾಯರು ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತ ಗೋಪಾಲಕರು ಈ ಶಿಬಿರದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.