ಮಗುವಿನ ಹತ್ಯೆ ನಡೆಸಿ ತಾಯಿಯೂ ಆತ್ಮಹತ್ಯೆ..!

ಮಗುವಿನ ಹತ್ಯೆ ನಡೆಸಿ ತಾಯಿಯೂ ಆತ್ಮಹತ್ಯೆ..!

ಮಗುವಿನ ಹತ್ಯೆ ನಡೆಸಿ ತಾಯಿಯೂ ಆತ್ಮಹತ್ಯೆ..!
1 / 1

1. ಮಗುವಿನ ಹತ್ಯೆ ನಡೆಸಿ ತಾಯಿಯೂ ಆತ್ಮಹತ್ಯೆ..!

ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿದೆ. ಇಡುಕ್ಕಿ ತೊಡುಪುಳ ನಿವಾಸಿ ಶರತ್ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಮಗು ಶ್ರೀನಂದಾಳನ್ನು ಕೊಂದು ಬಳಿಕ ತಾಯಿ ಸಾವಿಗೆ ಶರಣಾಗಿದ್ದಾಳೆ. ಪತಿ ಶರತ್ ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದಾರೆ. ಪತಿಯ ಮನೆಯಲ್ಲೇ ಇದ್ದ ಬಿಂದು, ಇಬ್ಬರು ಮಕ್ಕಳಾದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಭಾನುವಾರ ಮುಳ್ಳೇರಿಯ ಬಳಿಯಲ್ಲಿರುವ ತಾಯಿ ಮನೆ ಕೋಪಾಳಕೊಚ್ಚಿ ಬಂದಿದ್ದರು. ಎ.5ರಂದು ಮಧ್ಯಾಹ್ನ ಬಿಂದು ಮನೆ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದು, ಅವರ ಕೈಯ ನರ ಕತ್ತರಿಸಲ್ಪಟ್ಟು ರಕ್ತ ಸೋರುತ್ತಿತ್ತು. ಇದೇ ವೇಳೆ ಮಗು ಶ್ರೀನಂದ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿದ್ದು, ಅದನ್ನು ಕಂಡ ಮನೆಯವರು ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.ವಿಷಯ ತಿಳಿದ ಕಾಸರಗೋಡು ತಹಶೀಲ್ದಾ‌ರ್ ಪಿ.ಎಂ.ಅಬೂಬಕ್ಕರ್ ಸಿದ್ದಿಕ್, ಕಾಸರಗೋಡು ಡಿವೈಎಸ್‌ಪಿ ಜಯನ್ ಡೊಮಿನಿಕ್ ಹಾಗೂ ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಗೆ ಕಾರಣ ಗೊತ್ತಾಗಿಲ್ಲ.