ಕಾಸರಗೋಡು: ಕಾರು - ಸ್ಕೂಟರ್ ಢಿಕ್ಕಿಯಾಗಿ ಇಬ್ಬರು ಮೃತ್ಯು, ಆರು ಮಂದಿಗೆ ಗಾಯ,
Kasaragod Car And Scooter Acciedent,
1. ಕಾಸರಗೋಡು: ಕಾರು - ಸ್ಕೂಟರ್ ಢಿಕ್ಕಿಯಾಗಿ ಇಬ್ಬರು ಮೃತ್ಯು, ಆರು ಮಂದಿಗೆ ಗಾಯ,
ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತ ಪಟ್ಟು, ಆರು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಸ್ಕೂಟರ್ ಸವಾರರಾದ ಚಟ್ಟಂಚಾಲ್ ನ ಗೋಪಾಲ ಕೃಷ್ಣ (55) ಮತ್ತು ಪರವ ನಡ್ಕದ ನಾರಾಯಣನ್ (62) ಮೃತಪಟ್ಟವರು. ಪಾಸ್ ಪೋರ್ಟ್ ಸಂಬಂಧ ಕೆಲಸಕ್ಕಾಗಿ ಬದಿಯಡ್ಕ ನಿವಾಸಿಗಳು ಪಯ್ಯನ್ನೂರಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಬದಿಯಡ್ಕ ದ ಶಾಹೀನ್ (36), ಪತ್ನಿ ಸಹಲಾ, ಸಂಬ ಧಿಕರಾದ ಸಹೀನ್ , ಶಮ್ನಾಸ್ , ಫಾತಿಮಾ, ಹನಾ ಫಾತಿಮಾ ಗಾಯ ಗೊಂಡಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಪಾದಚಾರಿ ಯೋ ರ್ವರು ಗಾಯ ಗೊಂಡಿದ್ದು, ಗಂಭೀರ ಗಾಯಗೊಂಡ ಹಂಝ (65) ರವರನ್ನು ಕಾಸರ ಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸಂಪೂರ್ಣ ನಜ್ಜಗುಜ್ಜಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಕಾಮಗಾರಿಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.