ಆಕ್ರೋಶದಲ್ಲಿ ಉದ್ಯಾವರ ಮಾಡ ಜನರು. ಬೇಡಿಕೆ ಈಡೇರಿಸುವವರೆಗೆ ಪ್ರತಿಭಾತಿಸುವ ನಿರ್ಧಾರ

Protesht,Manjeshwara,Kerala

ಉದ್ಯಾವರ ಮಾಡ ಜನ ಶೋಕ ಸಾಗರದಲ್ಲಿ,  ಸರಿಯಾದ ಸರ್ವೇ  ಸಮಾಲೋಚನೆ ಇಲ್ಲದೆ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಕೆಗೆ ಬಲಿಯಾದದ್ದು  ಅಮಾಯಕ ಯುವಕ.  ತಮ್ಮ ಕರುಳ ಕುಡಿ ಇನ್ನು ಈ ಭೂಮಿ ಮೇಲೆ ಇಲ್ಲ ಎನ್ನುವ ಸುದ್ದಿ  ತಿಳಿದಾಗ ಪ್ರಜ್ಞೆ ಕಳಕೊಂಡ ತಾಯಿ ಇನ್ನೂ ಎಚ್ಚರ ಗೊಂಡಿಲ್ಲ..

ಹೌದು ಮೊನ್ನೆ ಉದ್ಯಾವರ ಮಾಡದ ಬಳಿ ರಸ್ತೆ ದಾಟುವಾಗ ಉಂಟಾದ ಅಪಘಾತದಲ್ಲಿ  ಮಾಡ ನಿವಾಸಿ ರಘು ನಾಥ ಆಳ್ವ ಲಕ್ಷ್ಮಿ ದಂಪತಿಯ ಪುತ್ರ ಸುಮಂತ್ ಆಳ್ವ ಪ್ರಾಣ ಕಳೆದು ಕೊಂಡಿದ್ದಾನೆ.  ಘಟನೆ ನಡೆದ ಕೂಡಲೇ ಊರವರು ಯುವಕನನ್ನ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ರು ಪ್ರಾಣ ಉಳಿಸಲಾಗಲಿಲ್ಲ.  ಇಷ್ಟಕೆಲ್ಲ ಕಾರಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಕೆ ಎಂದು ಊರವರು ಕುಪಿತ ಗೊಂಡು ಇಂದು ಬಹಳಷ್ಟು ಜನ ಸೇರಿ ಪ್ರತಿಭಟನೆ ನಡೆಸಿದರು. ಇಂತ ದುರ್ಗಟನೆ ಮತ್ತೆ ಮರುಕಲಿಸದಿರಲು ನಿವಾಸಿಗಳು ಸರಕಾರದ ಮುಂದೆ ಕೆಲವೊಂದು ಬೇಡಿಕೆ ಇಟ್ಟಿದ್ದಾರೆ. ಇದು ಈಡೇರಿಸುವ ವರೆಗೆ ಕಾಮಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟುಇಡಿದಿದ್ದಾರೆ. ಬೇಡಿಕೆ ಕೇವಲ ಇಷ್ಟೇ ಒಂದು ಅಂಡರ್ ಪಾಸ್ ಮತ್ತು ಪಾದಚಾರಿಗಳಿಗೆ ಮೇಲುಸೇತುವೆ ಅಷ್ಟೇ ಇನ್ನಾದರೂ ಇಂತಹ ಘಟನೆ ಮರುಕಲಿಸುವ ಮೊದಲು ರಸ್ತೆ ನಿರ್ಮಾಣ ಕಂಪೆನಿಗಳ ಇಂಜಿನಿಯರುಗಳು  ಮತ್ತು  ಸರಕಾರ ಕಣ್ಣು ತೆರೆಯಲಿ  ಸುಮಂತನ ಆತ್ಮಕ್ಕೆ ಆಗಲಾದರೂ ಶಾಂತಿ ದೊರೆತೀತು.