ಉಳ್ಳಾಲ: ಅಗಲಿದ ನೃತ್ಯ ವಿದ್ಯಾರ್ಥಿನಿ ಸ್ಮರಣಾರ್ಥ - ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯಧನ,

Ullala Money Sponcerd to Canecer Patient,

ಉಳ್ಳಾಲ: ಅಗಲಿದ ನೃತ್ಯ ವಿದ್ಯಾರ್ಥಿನಿ ಸ್ಮರಣಾರ್ಥ - ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯಧನ,
1 / 1

1. ಉಳ್ಳಾಲ: ಅಗಲಿದ ನೃತ್ಯ ವಿದ್ಯಾರ್ಥಿನಿ ಸ್ಮರಣಾರ್ಥ - ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯಧನ,

ಅಗಲಿದ ನೃತ್ಯ ವಿದ್ಯಾರ್ಥಿನಿ ಸ್ಮರಣಾರ್ಥ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಸಂಸ್ಥೆಯವರು ದಾನಿಗಳಿಂದ, ಮೃತ ವಿದ್ಯಾರ್ಥಿನಿ ಹೆತ್ತವರು, ವಿದ್ಯಾರ್ಥಿಗಳು ಸಂಗ್ರಹಿಸಿದ ಸಹಾಯಧನವನ್ನು ಜಿಲ್ಲೆಯ ಇಬ್ಬರು ಕ್ಯಾನ್ಸರ್ ರೋಗಿ ಮಕ್ಕಳ ಚಿಕಿತ್ಸೆಗೆ ನೀಡಲು ಮುಂದಾಗುವ ಮೂಲಕ ಮಾನವೀಯತೆ ತೋರಿದ್ದಾರೆ.ದುಬೈ, ಅಬುದಾಬಿ, ಶ್ರೀಲಂಕಾ ದೇಶಗಳಲ್ಲಿ ಸಂಸ್ಥೆ ಈಗಾಗಲೇ ನೃಥ್ಯ ಪ್ರದರ್ಶನಗೈದು ಜನಮೆಚ್ಚುಗೆಯನ್ನು ಪಡೆದಿದೆ. ಇದೇ ಸಂಸ್ಥೆಯಲ್ಲಿ ಆಡಿ ಬೆಳೆದು, ನೃತ್ಯ ವಿದ್ಯಾರ್ಥಿನಿಯಾಗಿದ್ದ ಶೃತಿ ಬೇಕಲ್ (22) ಅವರು ಇತ್ತೀಚೆಗೆ ನಿಧನರಾಗಿದ್ದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಶೃತಿ ಬೇಕಲ್ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದಲ್ಲಿ ಭರತನಾಟ್ಯ ನೃತ್ಯ ವಿದ್ಯಾರ್ಥಿನಿಯಾಗಿದ್ದರು. ಸಂಸ್ಥೆಯಲ್ಲಿದ್ದುಕೊಂಡು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರು. ಇದೀಗ ಅವರ ಸ್ಮರಣಾರ್ಥ `ಶೃತಿ ಸ್ಮೃತಿ ನಿಧಿ' ಅನ್ನುವ ಯೋಜನೆಯನ್ನು ಹಮ್ಮಿಕೊಂಡಿರುವ ಸಂಸ್ಥೆ, ದಾನಿಗಳಿಂದ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಅವರ ಕುಟುಂಬಸ್ಥರಿಗೆ ಜ.14 ರಂದು ಉಳ್ಳಾಲದಲ್ಲಿ ಹಮ್ಮಿಕೊಂಡ ಗುರುಕುಲ ಉತ್ಸವ-2024 ರಲ್ಲಿ ಶೃತಿ ಅವರ ತಂದೆ ನರೇಶ್ ಪಂಡಿತ್ ಹೌಸ್ ಹಸ್ತಾಂತರಿಸಲಿದ್ದಾರೆ.